ಇತಿಹಾಸ ಪ್ರಸಿದ್ಧ ಹೆಬ್ಬಳ್ಳಿ ಶಾಲೆಗೆ ಬಣ್ಣದರ್ಪಣ ಮಾಡಿದ ಪರಿಸರಪ್ರೇಮ ತಂಡ

ಧಾರವಾಡ 29 : 1116 ರಲ್ಲಿ ಹುಟ್ಟಿದ ಊರು ಮೂಲ ಹೆಸರು ಬ್ರಹ್ಮಪುರಿ ಯಾದವ ಚಕ್ರವರ್ತಿಗಳು ಆಳುತ್ತಿದ್ದರು, ಯಾದವ ಚಕ್ರವರ್ತಿ ರಾಜಸಿಂಹನದೇವನ ಆಳ್ವಿಕೆಗೆ ಈ ಗ್ರಾಮ ಒಳಪಟ್ಟಿತ್ತು,
101 ಗುಡಿಗಳ 101 ಬಾವಿಗಳು ಈ ಗ್ರಾಮದಲ್ಲಿ ಇವೆ, 77 ಎಕರೆ ಮಾರುಕಟ್ಟೆ ಇತ್ತಂತೆ, 50 ಗ್ರಾಮಗಳು ಈ ಬ್ರಹ್ಮ ಪುರಿ ವ್ಯಾಪ್ತಿಯಲ್ಲಿ ಇದ್ದವು, 20 ಪೂಟ ಎತ್ತರದ ಕಾಂಪೌಂಡ್ ಗೋಡೆ ಗ್ರಾಮದ ಸುತ್ತಲೂ ಈ ಗೋಡೆಯ ಮೇಲೆ ಸ್ಥರಿಯಾ ಬಳ್ಳಿ (ಅದು ಒಂದು ವಿಷಕಾರಿ ಬಳ್ಳಿ) ಅದರಲ್ಲಿ ವಿಷ ಸರ್ಪಗಳು ಅವು ವೈರಿಗಳು ಒಳ ಬರದಂತೆ ತುಡಿಯುತ್ತಿದವು. ಕ್ರಮೇಣ ಯಾದವರ ಆಳ್ವಿಕೆ ಮುಗಿದ ಮೇಲೆ ಕಾಂಪೌಂಡ್ ಬೀಳಲು ಪ್ರಾರಂಭಿಸಿತು ಆಗ ದಾರಿ ಹೋಕರು ವಿಷಕಾರಿ ಬಳ್ಳಿ ನೋಡುತ್ತಾ ಹೇ ಬಳ್ಳಿ.., ಹೇ ಬಳ್ಳಿ  ಎನ್ನುತ್ತಿದ್ದರು.

ಆಗಿನಿಂದಲೇ ಈ ಊರಿಗೆ ಹೆಬಳ್ಳಿ ಎಂದು ಹೆಸರು ಬಂದಿತು, ಈ ಊರಿನಲ್ಲಿ ಬ್ರಿಟಿಷ್ ಕಾಲದ ಶಾಲೆ ಆ ಶಾಲೆಯ ಕಟ್ಟಡಕ್ಕೆ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಭೀಮಕ್ಕನವರ ಬಣ್ಣದರ್ಪಣಕ್ಕೆ ಚಾಲನೆ ನೀಡಿದರು, ಸದಸ್ಯರಾದ ಸುರೇಶ ಬನ್ನಿಗಿಡದ, ವಿಠ್ಠಲ ಭೋವಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕೃಷ್ಣಾಜಿ ನಾಡಿಗೇರ, ಮೌಲಾಸಾಬ ಕೊಣ್ಣೂರ, ಈರಣ್ಣ ಉಮಣ್ಣವರ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರು ತಳವಾರ ಪರಿಸರ ಪ್ರೇಮ ತಂಡದ ಪ್ರಮುಖರು ಮಲ್ಲಿಕಾರ್ಜುನ ತೊದಲಬಾಗಿ ಸರ್ ಧಾರವಾಡ ಪರಿಸರ ಪ್ರೇಮ ತಂಡದ ಅಧ್ಯಕ್ಷರಾದ ಮಲ್ಲಿಕಾರ್ಜುನ ಉಪ್ಪಿನ, ಹುಬ್ಬಳ್ಳಿಯ ಈಶ್ವರಿ ಫೌಂಡೇಶನ್ ಅಧ್ಯಕ್ಷರಾದ ಸಂತೋಷ ವರ್ಣೇಕರ, ಪವರ್ ಆಫ್ ಯುಥ್ಸ ಫೌಂಡೇಷನ್ ಅಧ್ಯಕ್ಷರಾದ ರವಿಚಂದ್ರನ್ ದೊಡ್ಡಿಹಾಳ ಉಪಾಧ್ಯಕ್ಷರಾದ ಶ್ರೀನಿವಾಸ ವಾಲೀಕಾರ, ಮುಖ್ಯ ಶಿಕ್ಷಕಿ ನಾಗರತ್ನ ಅಂಚಟಗೇರಿ ಇವರ ಸಮ್ಮುಖದಲ್ಲಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಹೆಬ್ಬಳ್ಳಿ ಬಣ್ಣದರ್ಪಣ ಮಾಡಲಾಯಿತು. ಇದಕ್ಕೂ ಮೊದಲು ಮಾಜಿ ಪ್ರಧಾನಿ ದಿವಂಗತ ಡಾ, ಮನಮೋಹನ್ ಸಿಂಗ್ ರವರಿಗೆ ಶೃದ್ದಾಂಜಲಿ ಅರ್ಪಿಸಿ, ಶಾಲೆಗೆ ಬಣ್ಣವನ್ನು ಹಚ್ಚಲಾಯಿತು, ಖ್ಯಾತ ಪರಿಸರವಾದಿ ಚಲನಚಿತ್ರ ನಟ ನಿರ್ದೇಶಕ ಸುರೇಶ ಹೆಬ್ಳೀಕರ್ ಕಲಿತ 150 ವರ್ಷಗಳ ಇತಿಹಾಸ ಹೊಂದಿದ ಈ ಶಾಲೆಗೆ ಪರಿಸರ ಪ್ರೇಮ ತಂಡದಿಂದ ಈ ದಿನ ಇಡೀ ದಿನ ಬಣ್ಣದರ್ಪಣ ಮಾಡಲಾಯಿತು.

ಧಾರವಾಡ ಪರಿಸರಪ್ರೇಮ ತಂಡದಿಂದ 20 ಲೀಟರ್ ದಯಾನಂದ ಆಯಟ್ಟಿ 10 ಲೀಟರ್ ಸಂತೋಷ ವರ್ಣೇಕರ 20 ಲೀಟರ ಬಣ್ಣವನ್ನು ಕೊಡಿಸಿದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!