“ಶಿಕ್ಷಣ ಪ್ರೇಮಿ ಸಾವಮ್ಮ ಹೊಂಗಲ ಇನ್ನಿಲ್ಲ”

“ಶಿಕ್ಷಣ ಪ್ರೇಮಿ ಸಾವಮ್ಮ ಹೊಂಗಲ ಇನ್ನಿಲ್ಲ” ತಮ್ಮೂರಿನ ಶಾಲೆಯ ಶಿಕ್ಷಕರಿಗೆ ಸತತ 42 ವರ್ಷಗಳವರೆಗೆ ತಮ್ಮ ಜೀವಿತಾವಧಿಯವರೆಗೂ ಅನ್ನದಾನದ ಮೂಲಕ ತಮ್ಮ ಗ್ರಾಮದ ಮಕ್ಕಳ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಿದ್ದ ಧಾರವಾಡ ತಾಲೂಕಿನ ಜೀರಿಗವಾಡ ಗ್ರಾಮದ ಶಿಕ್ಷಣ ಪ್ರೇಮಿ ಸಾವಮ್ಮ ಈರಪ್ಪ ಹೊಂಗಲ (92) ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಇಬ್ಬರು ಪುತ್ರರನ್ನು ಹೊಂದಿದ್ದ ಇವರಿಗೆ ಈಗ ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ.

ಅತ್ಯಂತ ಸರಳ, ಸಜ್ಜನ, ಸಾತ್ವಿಕರಾಗಿದ್ದ ಇವರು, ತಮ್ಮ ಊರಿನ ಮಕ್ಕಳ ಶಿಕ್ಷಣ ಕಲಿಕೆಗೆ ಯಾವುದೇ ತೊಂದರೆ ಆಗಬಾರದೆಂದು ತಮ್ಮೂರಿನ ಶಾಲೆಯ ಶಿಕ್ಷಕರಿಗೆ ನಿರಂತರ ಅನ್ನದಾಸೋಹ ಮಾಡುತ್ತಾ ಬಂದಿರುವ ಈ ಅಜ್ಜಿ ಎಲ್ಲರಿಗೂ ಮಾದರಿಯಾಗಿದ್ದರು. ಕೇವಲ ಶಿಕ್ಷಕರಿಗೆ ಅಷ್ಟೇ ಅಲ್ಲದೇ ಮನೆಗೆ ಬರುವ ಪ್ರತಿಯೊಬ್ಬರಿಗೂ ಆದರಿಸುವ ಮೂಲಕ “ಅತಿಥಿ ದೇವೋಭವ” ಎಂಬ ಭವ್ಯ ಭಾರತೀಯ ಸಂಸ್ಕೃತಿಯನ್ನು ಈ ಅಜ್ಜಿ ಸಾಕಾರಗೊಳಿಸಿದ್ದರು. ಇವರ ಸಾಮಾಜಿಕ ಕಳಕಳಿಯ ಕುರಿತು ನಮ್ಮ ಹೆಮ್ಮೆಯ ಸಂಯುಕ್ತ ಕರ್ನಾಟಕ ಪತ್ರಿಕೆಯು 2017 ನವೆಂಬರ 13 ರಂದು “ಅನ್ನದಾನದ ಮೂಲಕ ಶಿಕ್ಷಣ ಅಬಾಧಿತ” ಎಂಬ ಶೀರ್ಷಿಕೆಯಲ್ಲಿ ರಾಜ್ಯವ್ಯಾಪಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಹೋಗಿ ಬನ್ನಿ ಅಜ್ಜಿ ನಿಮ್ಮ ನಿಸ್ವಾರ್ಥ ಬದುಕು ನಮೆಲ್ಲರಿಗೂ ಪ್ರೇರಣಾದಾಯಕವಾಗಿದೆ.

ನಿಮಗೆ ನನ್ನ ಭಾವಪೂರ್ಣ ಶೃದ್ಧಾಂಜಲಿ ಮತ್ತೆ ಹುಟ್ಟಿ ಬನ್ನಿ ಶರಣು ಶರಣಾರ್ಥಿಗಳು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!