ಧಾರವಾಡ  : ಡಾ.ಯಶವಂತ ಸರದೇಶಪಾಂಡೆ ಅವರ ಹೊಚ್ಚ ಹೊಸ ನಾಟಕ ‘ಅಮರ ಮಧುರ ಪ್ರೇಮ’ ಎಪ್ರಿಲ್‌ 20 ಭಾನುವಾರ | ಸಂಜೆ 6:15 ಕ್ಕೆ ಸೃಜನಾ ರಂಗಮಂದಿರ, ಧಾರವಾಡ ನಡೆಯುವದು ಎಂದು ಡಾ ಯಶವಂತ ಸರದೇಶಪಾಂಡೆ ತಿಳಿಸಿದರು.

ನಮ್ಮ ತಂಡವು ‘ಅಮರ ಮಧುರ ಪ್ರೇಮ’ ಎಂಬ ಹೊಸ ನಾಟಕವನ್ನು ತಯಾರಿಸಿದೆ. ಹಿರಿಯ ನಾಗರಿಕರ ಸುತ್ತ ಹೆಣೆದ ಈ ನಾಟಕವು ನುರಿತ ಕಲಾವಿದರಿಂದ, ಇದೇ ಏಪ್ರಿಲ್ 20 ರಂದು, ರವಿವಾರ ಧಾರವಾಡದ ಸೃಜನಾ ರಂಗ ಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ. ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್ ಆಯೋಜನೆಯ ಗಂಗಾವತಿ ರೇಷ್ಮೆ ರಂಗೋತ್ಸವದ ಭಾಗವಾಗಿ ಮತ್ತು ಜೋಶಿಸ್ ಆಕ್ಟೋಸ್ಕೋಪ ಸಹಯೋಗದಲ್ಲಿ ಈ ಪ್ರದರ್ಶನ ನಡೆಯಲಿದೆ ಎಂದರು.

ವಯೋವೃದ್ಧರ ವಿವಾಹ ಪ್ರಸಂಗದ, ಸಂಭ್ರದ್ಧ ಸಂಭಾಷಣೆಯ, ಸುಂದರ ಹಾಸ್ಯ ನಾಟಕ ‘ಅಮರ ಮಧುರ ಪ್ರೇಮ’, ಕನ್ನಡ ಟೆಲಿವಿಷನ್ ಲೋಕದ ಜನಪ್ರಿಯ ಜೋಡಿ ವೀಣಾ ಮತ್ತು ಸುಂದರ ಅವರು ರಂಗದ ಮೇಲೆ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಮರಾಠಿಯಲ್ಲಿ ಪ್ರಸಿದ್ಧ ನಾಟಕಕಾರ ಹೇಮಂತ ಎದಲಬಾದಕರ್ ಬರೆದದ್ದನ್ನ ಕನ್ನಡಕ್ಕೆ ಅನುವಾದಿಸಿ, ನಟಿಸಿ, ನಿರ್ದೇಶಿಸಿದವರು ಹುಬ್ಬಳ್ಳಿಯ ರಂಗ ಕಲಾವಿದ ಡಾ ಯಶವಂತ ಸರದೇಶಪಾಂಡೆ, ರಂಗ ಸಜ್ಜಿಕೆ, ಹಿನ್ನೆಲೆ ಸಂಗೀತ, ಶೀರ್ಷಕ ಗೀತೆ, ವಸ್ತ್ರವಿನ್ಯಾಸ, ಬೆಳಕು ಸಂಯೋಜನೆಗಳು ಸರಳ ಮತ್ತು ಆಕರ್ಷಕವಾಗಿವೆ. ಪ್ರವೀಣ್ ಡಿ ರಾವ್ ಅವರ ಸಂಗೀತ, ಜೀವನ್ ಫನಾರ್ಂಡಿಸ್, ಪ್ರದೀಪ ಮುಧೋಳ ಅವರುಗಳ ಮಾಡಿದ್ದಾರೆ, ರಂಗಸಜ್ಜಿಕೆ ಮತ್ತು ವ್ಯವಸ್ಥೆ, ನಾಗರಾಜ ಪಾಟೀಲ್‌ ಅವರ ಬೆಳಕು ವಿನ್ಯಾಸ ಆಕರ್ಷಕವಾಗಿವೆ.

ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಪ್ರಯೋಗ ಪ್ರದರ್ಶನಗಳಿಂದ ಖ್ಯಾತರಾಗಿರುವ ಯಶವಂತ ಸರದೇಶಪಾಂಡೆ ತಂಡದವರು ಈ ಪ್ರಸ್ತುತಿಯಲ್ಲೂ ಹೊಸತನವನ್ನು ತುಂಬುವುದರ ಜೊತೆಗೆ ಸ್ವಚ್ಛ, ಸುಂದರ, ಹಾಸ್ಯವನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಧಾನಿಯ ರಂಗರಸಿಕರ ಜನಮನ ಗೆದ್ದಿರುವ ‘ಅಮರ ಮಧುರ ಪ್ರೇಮ’ ಸುಂದರ ಹಾಸ್ಯ ನಾಟಕ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಗಂಗಾವತಿ ರೇಷ್ಮೆ ರಂಗೋತ್ಸವದ ಪ್ರಮುಖ ಕಾರ್ಯಕ್ರವಾಗಿ ಪ್ರದರ್ಶಿತವಾಗಲಿದೆ.

ನಾಟಕ ನೋಡಲು ಬಂದಂತಹ ಅದೃಷ್ಟವಂತ ಪ್ರೇಕ್ಷಕ ಮಹಾನುಭಾವರಿಗೆ ಸಾವಿರಾರು ರೂಪಾಯಿ ಬೆಲೆಯ ಸಿಲ್ಕ್ ಸೀರೆಯ ಉಡುಗರೆ ನೀಡಲಾಗುತ್ತದೆ. ಪ್ರೇಕ್ಷಕರನ್ನು ರಂಗಮಂದಿರಗಳ ಕಡೆಗೆ ಮತ್ತೆ ಕರೆತರುವುದಕ್ಕೆ ಇದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಕಲಾವಿದ ಸರದೇಶಪಾಂಡೆ ಮತ್ತು ಗಂಗಾವತಿ ಸಿಲ್ಕ್ ಪ್ಯಾಲೇಸ್ ಒಡೆಯ ಆನಂದ ಕಮತಗಿ ಹೆಮ್ಮೆಯಿಂದ ತಿಳಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ವೀಣಾ ಸುಂದರ, ಸುಂದರ, ಡಾ ಪವನ ಜೋಶಿ ಇದ್ದರು .
ಹೆಚ್ಚಿನ ಮಾಹಿತಿಗಾಗಿ 97433 10950 ಸಂಪಕಿ೯ಸಲು ಕೋರಿದರು.