
ಹಾವೇರಿ : ಶಾಸಕರಾದ ಪಠಾಣ ಯಾಸೀರ ಅಹ್ಮದಖಾನ್ ಅವರ ಕೋರಿಕೆಯ ಮೇರೆಗೆ ಶಿಗ್ಗಾಂವಿ-ಸವಣೂರ ತಾಲೂಕಿನ ಆಸಕ್ತರಿಗೆ ಕೋಳಿ ಫಾರ್ಮ್ ಉದ್ಯಮದ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡಲು ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿ. ಮುಂದೆ ಬಂದಿದೆ.
ಏ. 23 ರಂದು ಹುಬ್ಬಳ್ಳಿ ನಗರದಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ಉದ್ಯಮ ಆರಂಭಿಸುವ ಕುರಿತು ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ದೇಶದಲ್ಲಿ ಕೋಳಿ ಫಾರ್ಮ್ ಉದ್ಯಮದಲ್ಲಿ ಹೆಸರು ಗಳಿಸಿರುವ ಸಂಸ್ಥೆ ತಾಲೂಕಿನ ಆಸಕ್ತರಿಗೂ ಉಪಯುಕ್ತ ಮಾಹಿತಿ ನೀಡಿ, ಅಗತ್ಯ ಸಹಕಾರ ಒದಗಿಸಲು ಮುಂದೆ ಬಂದಿದ್ದು ಆಸಕ್ತರು ಸದುಪಯೋಗ ಪಡಿಸಿಕೊಳ್ಳಬಹುದು. ಮಾಹಿತಿ ಹಾಗೂ ಹೆಸರು ನೋಂದಣಿಗೆ ರವಿ ಕಾಳಪ್ಪನವರ, ಮೊ. 9108306714 ಸಂಪರ್ಕಿಸಬಹುದು. ಉದ್ಯಮದಲ್ಲಿ ತೊಡಗಿಸಿಕೊಂಡು ಆದಾಯ ಗಳಿಸುವ ಅವಕಾಶದ ಸದುಪಯೋಗಕ್ಕೆ ಕೋರಿದೆ…