
ಧಾರವಾಡ 27 : ನಗರದ ಖ್ಯಾತ ಜಾನಪದ ನೃತ್ಯ ಕಲಾವಿದ ಪ್ರಕಾಶ ಮಲ್ಲಿಗವಾಡ ಮಾರ್ಗದರ್ಶನದಲ್ಲಿ ರೈಸಿಂಗ ಸ್ಟಾರ್ಸ ಆರ್ಟ ಆಯ್ಯಂಡ ಕಲ್ಚರಲ್ ಅಕಾಡೆಮಿಯ ತಂಡದಿಂದ “ಭಾರತ ಸಂವಿಧಾನ”ದ ಕುರಿತ ಜಾನಪದ ನೃತ್ಯ ರೂಪಕ ಪ್ರದರ್ಶನವಾಯಿತು.
ಜಾನಪದ ನೆರಳು ತಂಡದ ಸಂತೋಷ ಸಾಲಿಯಾನ (ನೃತ್ಯ ಸಂಯೋಜನೆ) ಕಲಾವಿದರಾದ ಅಕ್ಷತಾ ದಲಾಲ್, ಪುಂಡಲೀಕ್ ಸಾಗರೆಕರ, ಅಂಜಲಿ ಬಸವಾ, ಯಶೋಧರೆ ಮಲ್ಲಿಗವಾಡ, ಬಸಯ್ಯ ಬನ್ನಿಗೋಳಮಠ, ಭಾಗ್ಯಶ್ರೀ ಗಾಳೆಮ್ಮನವರ ಹಾಗೂ ಮುಂತಾದವರು ಮನಮೋಹಕವಾಗಿ ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.