
ಧಾರವಾಡ : ಶಾಸಕರಾದ ವಿನಯ ಕುಲಕರ್ಣಿ ಯವರ ಅನತಿಯ ಮೇರೆಗೆ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಬಿ ಜೆ ಪಿ ಬೆಂಬಲಿತ ಪರಶುರಾಮ ಮಾನೆ ಐದು ಮತ ಪಡೆದು ಸೋಲು0ಡರು. ಕಾಂಗ್ರೇಸನ ಈರಣ್ಣ ಹಸಬಿಯವರು ಏಳು ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.
ಈ ಗೆಲುವಿನ ರೂವಾರಿ ಶಿವಲೀಲಾ ವಿನಯ ಕುಲಕರ್ಣಿ ಹಾಗೂ ಅವರ ತಂಡ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ಮುಖಂಡರುಗಳಾದ ಮಡಿವಾಳಪ್ಪ ದಿಂಡಲ ಕೊಪ್ಪ, ನಂದೀಶ್ ನಾಯ್ಕರ, ಶಿವಾನಂದ ಮುದ್ದಿ ಸೇರಿದಂತೆ, ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರುಗಳಾದ ಬಸವಪ್ರಭು ಹುಂಬೇರಿ, ದೇವರಾಜ್ ಪಾಟೀಲ್, ಹಸನಪ್ಪ ತಳವಾರ, ಶಾಂತಕ್ಕ ಹಟ್ಟಿ, ಮಂಜುನಾಥ ಮುಗ್ಗನವರ, ಶೇಕಪ್ಪ ಕುಂಬಾರ ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.