ಸ್ವಯಂಚಾಲಿತ ಗಾಲಿಕುರ್ಚಿ ರೋಟರಿ ಸಂಸ್ಥೆಯಿಂದ ಐಐಟಿ ವಿದ್ಯಾಥಿ೯ನಿಗೆ ದೇಣಿಗೆ

ಧಾರವಾಡ ೧೪ : ಐಐಟಿ ವಿದ್ಯಾಥಿ೯ನಿಗೆ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಹಾಗೂ ಐಐಟಿ ಧಾರವಾಡ ಇವರ ವತಿಯಿಂದ ಐಐಟಿ ಧಾರವಾಡದ ಬಿ.ಟೆಕ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾದ ಸ್ನೇಹಾ ಐನಾಪುರೆ ಇವರಿಗೆ ಸ್ವಯಂಚಾಲಿತ ಗಾಲಿಕುರ್ಚಿಯನ್ನು ಕೊಡಮಾಡಲಾಯಿತು.
ಸ್ನಾಯು ಕ್ಷಯವೆಂಬ ಭಾಗಶಃ ಅಂಗವಿಕಲತೆಯಿಂದ ವ್ಯಾಸಂಗದಲ್ಲಿ ದೈನಂದಿಕವಾಗಿ ಕಠಿಣತೆ ಅನುಭವಿಸುತ್ತಿದ್ದ ವಿದ್ಯಾರ್ಥಿನಿಯ ಸಹಾಯಕ್ಕೆಂದು ಐಐಟಿಯಲ್ಲಿ ಪ್ರಾಧ್ಯಾಪಕರಾಗಿರುವ ಶಾಗ್ನೀಕ್ ಸೇನ್ ಗಾಲಿಕುರ್ಚಿಗಾಗಿ ರೋಟರಿ ಸಂಸ್ಥೆಯನ್ನು ಸಂಪರ್ಕಿಸಿದ್ದರು.
ರೋಟರಿಯ ಜಿಲ್ಲಾ ಮುಖ್ಯಸ್ಥ ಶರದ್ ಪೈ ರೋಟರಿಯ ಪದಾಧಿಕಾರಿ ಗೌರಿ ಮದಲಭಾವಿ, ಸ್ಮಿತಾ, ಡಾ.ಆನಂದ ತಾವರಗೇರಿ, ಡಾ. ರವಿ ಹುಂಜಿ ಇವರ ಉಪಸ್ಥಿತಿಯಲ್ಲಿ ಅವರಿಗೆ ನೀಡಿದರು.

ರೋಟರಿ ಇದೇ ರೀತಿ ಮಾನವೀಯತೆ ಕೆಲಸಕ್ಕಾಗಿ ತನ್ನನ್ನು ಮೀಸಲಾಗಿರಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿಯೆಂದು ಶರದ ಪೈ ನುಡಿದರು.

ಸ್ನೇಹಾ ತನ್ನ ವ್ಯಾಸಂಗದ ನಂತರ ಒಳ್ಳೆಯ ಕೆಲಸಗಿಟ್ಟಿಸಿ , ಅವರೂ ಕೂಡ ಇನ್ನೊಬ್ಬರಿಗೆ ಹೀಗೆ ಸಹಾಯ ಮಾಡುವಂತಾಗಲಿ, ಈ ಸಹಾಯದ ಸರಪಳಿ ಹೀಗೆ ಬೆಳಿಯಲಿ ಎಂದು ಅಧ್ಯಕ್ಷರಾದ ಗೌರಿ ಮದಲಭಾವಿ ಹಾರೈಸಿದರು.ಇದು ರೋಟರಿ ಸೆವೆನ್ ಹಿಲ್ಸ್ ಹಾಗೂ ಐಐಟಿಯ ಜಂಟಿ ಕಾರ್ಯಕ್ರಮವಾಗಿತ್ತು. ದೇಣಿಗೆ ಪಡೆದ ವಿದ್ಯಾರ್ಥಿನಿ ಸ್ನೇಹಾ ಅವರ ಪಾಲಕರ ಸಂತೋಷ ಮನತುಂಬಿ ಬರುವಂತಿತ್ತು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!