ಧಾರವಾಡ 18 : ಜಗತ್ತು ವಿಶಾಲವಾಗಿದೆ ಬೇಕಾದಷ್ಟು ಅವಕಾಶಗಳಿವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಧಾರವಾಡದ‌ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಎಸ್.ಅಂಗಡಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಕಲಾ ಕಾಲೇಜಿನ ಇತಿಹಾಸ ಅಧ್ಯಯನ ಮತ ಸಂಶೋಧನಾ ವಿಭಾಗವು ಪ್ರವಾಸೋದ್ಯಮ ವಿಭಾಗದ ಭುವನ ವಿಜಯ ಸಭಾಂಗಣದಲ್ಲಿ ಆಯೋಜಿಸಿದ ಇತಿಹಾಸ ವಿಷಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅರ್ಹತೆಗೆ ತಕ್ಕಂತೆ ಅವಕಾಶಗಳು ಇವೆ ಅವುಗಳನ್ನು ಗುರುತಿಸಿ ಅವಕಾಶಗಳನ್ನು ಪಡೆದುಕೊಳ್ಳಬೇಕು. ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಸಾಧಿಸಲು ಪ್ರಯತ್ನಿಸಿ ಎಂದು ಅವರು ಕಠಿಣ ‌ಪರಿಶ್ರಮದ ಮೂಲಕ ಉನ್ನತ ಸ್ಥಾನವನ್ನು ತಲುಪಲು ಪ್ರಯತ್ನಿಸಿ ಗುರುವಿನ ಕ್ಕಿಂತ ಶಿಷ್ಯರು ಸಾಧನೆ ಮಾಡಿದಾಗ ಅದರ ಸಂತಸವೇ ಬೇರೆ ಎಂದ ಅವರು ಶಿಕ್ಷಕನಾದವನು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಸ್ವಯಂ ಸಾಮರ್ಥ್ಯ ನಂಬಿಕೆ ಇರಲಿ ಎಂದರು.

ವಿದ್ಯಾರ್ಥಿಗಳು ‌ಜೀವನದಲ್ಲಿ ಶಿಸ್ತನ್ನು ಬೆಳಸಿಕೊಳ್ಳಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಲು ಮುನ್ನುಗಿ ಎಂದರು. ನಾನು ಏನನ್ನಾದರೂ ಸಾಧಿಸುತ್ತೇನೆ ಎಂಬುದು ಹಟ ಇರಬೇಕು ಆಗ ಮಾತ್ರ ಸಾಧನೆ ಮಾಡಲು ಸಾದ್ಯ ಎಂದರು. ಬುದ್ದ, ಬಸವ ಅಂಬೇಡ್ಕರ್ ಅವರ ಆದರ್ಶಗಳನ್ನು ನಮಗೆ ಬೇಕು ಎಂದರು.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂಬೇಡ್ಕರ್ ಅವರು ಮಹಿಳೆಯರಿಗೆ, ಕಾರ್ಮಿಕರಿಗೆ, ಹಕ್ಕುಗಳನ್ನು ‌ಸಂವಿಧಾನದ ಮೂಲಕ ನೀಡಿ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಜಗದೀಶ್ ಕೆ ಮಾತನಾಡಿ ಇತಿಹಾಸದ ತಜ್ಞರು ಇತಿಹಾಸದ ಮೂಲಕ ಅನೇಕ ವೈಜ್ಞಾನಿಕ ವಿಷಯಗಳ ಕುರಿತು ಸಂಶೋಧನೆ ಮೂಲಕ ಬೆಳಕು ಚೆಲ್ಲಿದ್ದಾರೆ ಎಂದ ಅವರು ಇತಿಹಾಸದ ಅರಿಯದವ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೆ ಇತಿಹಾಸದ ಕುರಿತು ಜ್ಞಾನವನ್ನು ಹೊಂದಿರುವವದು ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ಆಯ್‌‌.ಸಿ.ಮುಳಗುಂದ ಮಾತನಾಡಿ ಭವಿಷ್ಯದ ‌ಮಾರ್ಗವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ, ಮೊದಲು ಅಧ್ಯಯನಕ್ಕೆ ಒತ್ತು ನೀಡಿ ವಾಸ್ತವವನ್ನು ಅರಿತು ಮುನ್ನಡೆಯಿರಿ ಎಂದ‌ ಅವರು ಇಂದು ಹಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದರು. ಧೈರ್ಯವಾಗಿ ಸವಾಲುಗಳನ್ನು ಎದುರಿಸಲು ಕಲಿಯಬೇಕು ಭವಿಷ್ಯದಲ್ಲಿ ಯಾವುದೇ ಕೆಲಸ ಮಾಡಲು ಸಿದ್ದವಾಗಿರಬೇಕು ಎಂದರು. ಸಂವಹನ ‌ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ವಿವಿಧ ವಿದೇಶಿ ಭಾಷೆಗಳನ್ನು ಕಲಿಯಲು ಪ್ರಯತ್ನಿಸಿ ಎಂದರು.
ಇತಿಹಾಸದ ವಿದ್ಯಾರ್ಥಿಗಳಿಗೆ ವಿವಿಧ ಅವಕಾಶಗಳಿವೆ.ನೀವು ಕಲಿತ ಕಾಲೇಜು ಮತ್ತು ಶಿಕ್ಷಕರನ್ನು ‌ಮರೆಯಬೇಡಿ ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಮಾಲತೇಶ ಹುಣಸಿಮರದ, ಡಾ.ವಿನಾಯಕ ಶೇಟ್, ಸೇರಿದಂತೆ ಸಂಶೋಧಕರು, ವಿದ್ಯಾರ್ಥಿಗಳು ಇದ್ದರು.