
ಧಾರವಾಡ 18 : ಸತತ ಮಳೆಯ ಕಾರಣ ಜನಜೀವನ ಅಸ್ತ್ರ ವಸ್ಥೆ ಆಗಿರುವ ಸಮಯದಲ್ಲಿ ಬಡವರು ಬದಕುವುದು ಕಷ್ಟವಾದ ಈ ಸಮಯದಲ್ಲಿ ಬಡವರ ಹಳೆ ಮನೆಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಪ್ರಕೃತಿ ವಿಕೋಪಕ್ಕೆ ನಗರದ ಸೈದಾಪುರದಲ್ಲಿ ರಾಮಣ್ಣ ಅಗಡಿ ಅವರ ಮನೆ ಸತತ ಮಳೆಗೆಯಿಂದಾಗಿ ಸೋಮವಾರ ಸಂಜೆ ಗೋಡೆ ಕುಸಿತದಿಂದ ಹಾನಿಯಾಗಿದೆ.
ಹಾನಿಯುದ ಮನೆಯನ್ನು ಬಿಜೆಪಿ ಮುಖಂಡ ಮೋಹನ ರಾಮದುರ್ಗ ವಿಕ್ಷಣೆ ಮಾಡುವ ಮೂಲಕ ಪಾಲಿಕೆ ಇಂಜನಿಯ ಮತ್ತು ತಹಶಿಲ್ದಾರ ಕಛೇರಿಗೆ ವಿಷಯ ತಿಳಿಸಿ ಸಂತ್ರಸ್ತರಿಗೆ ಮಳೆಯಿಂದಾಗ ಹಾನಿಗೆ ಸರ್ಕಾರದಿಂದ ಸಹಾಯ ಮಾಡಲು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ನಿಗಪ್ಪ ಶಿವಣ್ಣ, ಪ್ರಕಾಶ ಪಾಟೀಲ್ ಉಪಸ್ಥಿತರಿದ್ದರು.