ಧಾರವಾಡ :- ಪತ್ರಿಕೋದ್ಯಮವು ಭಾಷಾತೀತವಾಗಿದ್ದು ಓದುಗರ ಆಸಕ್ತಿ ಮೇರೆಗೆ ಅವುಗಳ ಮೌಲ್ಯ ಹೆಚ್ಚಳವಾದರೆ ಭಾಷಾಭಿಮಾನ ಕೂಡ ಹೆಚ್ಚಾಗುತ್ತದೆ ಎಂದು ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಅಭಿಪ್ರಾಯಪಟ್ಟರು.

ಶಹರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಹಿಂದಿ ಭಾಷೆ ಪತ್ರಿಕೋದ್ಯಮದಲ್ಲಿ ಅವಕಾಶ” ಕುರಿತು ಮಾತನಾಡಿದರು. ಮಾತೃ ಭಾಷೆ ಮನುಷ್ಯನ ಜೀವನದ ಭಾಗವಾದರೆ ಬದುಕಿಗಾಗಿ ಬಳಸುವ ಭಾಷೆ ಮಾನವನ ಅವಿಭಾಜ್ಯ ಅಂಗವಾಗಿದೆ. ರಾಷ್ಟç ಹಾಗೂ ಅಂತರಾಷ್ಟಿçÃಯ ಪ್ರದೇಶದಲ್ಲಿ ನಾವು ಕೆಲಸ ಮಾಡುವಾಗ ಆ ಪ್ರದೇಶದ ಭಾಷೆಯ ಅರಿವು ನಮಗೆ ಬೇಕಾಗುತ್ತದೆ. ಮಾತನಾಡಲು ಒಂದು ಭಾಷೆಯಾದರೆ ಕಲಿಯಲು ಸಾಕಷ್ಟು ಭಾಷೆಗಳಿವೆ. ಹಿಂದಿ ಭಾಷೆ ರಾಷ್ಟಿçÃಯ ಭಾಷೆಯಾಗಿದ್ದು ಅದನ್ನು ನಮ್ಮ ಕಲಿಕಾ ಜಿವನದಲ್ಲಿ ಅಳವಡಿಕೆ ಮಾಡಿಕೊಂಡರೆ ನಾವು ಮಾಡುವ ಉದ್ಯೋಗಕ್ಕೆ ಹೆಚ್ಚು ಸಹಕಾರಿಯಾಗುವುದು. ಭಾರತ ದೇಶದ ಅನೇಕ ಪ್ರದೇಶದಲ್ಲಿ ಹಿಂದಿ ಭಾಷೆಯಲ್ಲಿ ಪತ್ರಿಕೆಗಳು ಮುದ್ರಣವಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಹಿಂದಿ ಭಾಷೆ ಮಾತನಾಡಲು ಬರೆಯಲು ಸರಳವಾಗಿದ್ದರೂ ಕೂಡ ಅನೇಕ ವಿದ್ಯಾರ್ಥಿಗಳು ಹಿಂದಿ ಭಾಷೆ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದರು.

ಭಾಷೆಯನ್ನು ನಾವು ಗೌರವಿಸಬೇಕು ಅದನ್ನು ಕಲಿಯುವ ಪ್ರಯತ್ನ ಮಾಡಬೇಕು ಅಂದಾಗ ಮಾತ್ರ ನಾವು ಎಲ್ಲಿದ್ದರೂ ನಮ್ಮ ಜೀವನ ರೂಪಸಿಕೊಳ್ಳಬಹುದು. ಹಿಂದಿ ಭಾಷೆಯಲ್ಲಿ ಪತ್ರಿಕೋದ್ಯಮ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಹೊರ ರಾಜ್ಯದಲ್ಲಿ ಅಷ್ಟೆ ಅಲ್ಲ ಹೊರ ದೇಶದಲ್ಲೂ ಕೂಡ ವಿಫುಲ ಅವಕಾಶಗಳಿವೆ. ಇಂದಿನ ವಿದ್ಯಾರ್ಥಿಗಳು ಕನ್ನಡ, ಆಂಗ್ಲ ಭಾಷೆಯಲ್ಲಿ ಮಾತ್ರ ವಿದ್ಯಾಭ್ಯಾಸ ಮಾಡಿದರೆ ಸಾಲದು ಹಿಂದಿ ಭಾಷೆ ಜೊತೆಗೆ ಅನೇಕ ಭಾಷೆಗಳನ್ನು ಕಲಿತುಕೊಳ್ಳುವುದು ಮುಖ್ಯವಾಗಿದೆ. ಒಟ್ಟಾರೆಯಾಗಿ ಹಿಂದಿ ಭಾಷೆಯು ನಮ್ಮ ಜೀವನಕ್ಕೊಂದು ಅಡಿಪಾಯ ಹಾಕುವಲ್ಲಿ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.

ಪ್ರಾಚಾರ್ಯ ಡಾ.ಐ.ಎ.ಮುಲ್ಲಾ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ಡಿಜಿಟಲ್ ಯುಗವು ಭಾಷೆಯನ್ನು ಬಳಕೆ ಮಾಡಿಕೊಂಡು ಜನರಿಗೆ ಸುದ್ದಿ ನೀಡುತ್ತಿವೆ. ಒಂದು ಛಾಯಾಚಿತ್ರವನ್ನು ಗಮನಿಸಿ ಅದನ್ನು ಯಾವ ಭಾಷೆ ಮೂಲಕವಾದರೂ ಸಾರಾಂಶ ನೀಡಬಹುದು ಎಂದರು.

ಹಿAದಿ ವಿಭಾಗ ಮುಖ್ಯಸ್ತೆ ಡಾ. ಶಮೀಮ ಕಲಬುರ್ಗಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶ್ರೀಮತಿ ಫೈರೋಜ ಮೇಸ್ತಿç ಶ್ರೀಮತಿ ಹೀನಾ ಕೌಸರ ವೇದಿಕೆಯಲ್ಲಿದ್ದರು. ಹಿಂದಿ ಭಾಷೆ ಹಾಗೂ ಪತ್ರಿಕೋದ್ಯಮ ಕುರಿತು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.