ನಿರುದ್ಯೋಗಿಗಳಿಗೆ “ಉದ್ಯೋಗ”- ಎಸ್.ಪಿ.ಫೌಂಡೇಶನ್ ಅಮೋಘ ಕಾರ್ಯ

ನವಲಗುಂದ 10 : ಸಣ್ಣಪುಟ್ಟ ಸಹಾಯ ಮಾಡುವ ಜೊತೆಗೆ ಜೀವನದುದ್ದಕ್ಕೂ ಬದುಕು ಕಟ್ಟಿಕೊಳ್ಳಲು ನೌಕರಿ ಕೊಡಿಸುತ್ತಿರುವ ಎಸ್.ಪಿ.ಫೌಂಡೇಶನ್ ಕಾರ್ಯ ಅಮೋಘ ಎಂದು ಅಣ್ಣಿಗೇರಿಯ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ನುಡಿದರು.

ನವಲಗುಂದ ಮಾಡೆಲ್ ಹೈಸ್ಕೂಲಿನಲ್ಲಿ ಎಸ್.ಪಿ.ಫೌಂಡೇಶನ್ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಿರುದ್ಯೋಗಿಗಳೇ ಇಲ್ಲದಂತೆ ಮಾಡಲು ಹೊರಟಿರುವ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.

ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮಾತನಾಡಿ, ನಾವಿರುವ ನೆಲದ ಋಣ ತೀರಿಸಲು ಸದಾಕಾಲ ಫೌಂಡೇಶನ್ ಜೊತೆಗೂಡಿ, ಕೆಲಸ ಮಾಡುತ್ತೇನೆ. ಕ್ಷೇತ್ರದ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಜೊತೆಗೆ ರೈತಪರ, ಆರೋಗ್ಯದ ಜೊತೆಗೆ ಶಿಕ್ಷಣಕ್ಕೆ ಆಧ್ಯತೆ ಕೊಡಲು ಫೌಂಡೇಶನ್ ಮುಂದಾಗಬೇಕೆಂದು ಹೇಳಿದರು.

ಉದ್ಯೋಗ ಮೇಳವನ್ನ ನವಲಗುಂದ ಗವಿಮಠದ ಅಭಿನವ ಶ್ರೀ ಬಸವಲಿಂಗ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಾಗಲಿಂಗ ಮಠದ ಶ್ರೀ ವೀರಯ್ಯ ಮಹಾಸ್ವಾಮಿಗಳು, ಫೌಂಡೇಶನ್ ಅಧ್ಯಕ್ಷೆ ಫ್ರಭಾವತಿ ಪಾಟೀಲಮುನೇನಕೊಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಾವಿತ್ರಿ ಪೂಜಾರ, ಸಿ.ಎಸ್.ವಿ.ಪ್ರಸಾದ, ರಾಜಶೇಖರ ಕಂಪ್ಲಿ, ಶಿವಯೋಗಿ ಸುರಕೋಡ, ಸದಾನಂದ ಗಾಳಪ್ಪನವರ, ರೋಹಿತ ಮತ್ತಿಹಳ್ಳಿ, ಪ್ರಭು ಗುಳಗಣ್ಣನವರ, ಮುತ್ತು ಚಾಕಲಬ್ಬಿ, ಸೋಮಶೇಖರ್ ಪಟ್ಟಣಶೆಟ್ಟಿ, ಸುಭಾಸ ಕಿತ್ಲಿ, ಶಿವಕುಮಾರ ಬಳಿಗೇರ, ಷಣ್ಮುಖ ಗುರಿಕಾರ, ಎ.ಬಿ.ಹಿರೇಮಠ, ಎ.ಎಂ.ಮನಮಿ, ಅಣ್ಣಪ್ಪ ಬಾಗಿ, ರಾಯನಗೌಡರ, ಮಹಾಂತೇಶ ಕಲಾಲ, ವಿನಾಯಕ ದಾಡಿಬಾವಿ, ಮುತ್ತಣ್ಣ ಮನಮಿ, ಸಾಯಿಬಾಬಾ ಆನೇಗುಂದಿ, ಶರಣಪ್ಪಗೌಡ ದಾನಪ್ಪಗೌಡರ, ಈರಣ್ಣ ಹಸಬಿ, ಬಸವರಾಜ ಕಾತರಕಿ, ಅರುಣ ಮೆಣಸಿನಕಾಯಿ, ಮಲ್ಲಿಕಾರ್ಜುನ ಸಂಗನಗೌಡರ, ರಾಜುಗೌಡ ಪಾಟೀಲ, ಮಂಜುನಾಥ ರೋಗಣ್ಣನವರ, ಗಂಗಾಧರ ದುಂದೂರ, ಚಂದ್ರು ಕುಂದಗೋಳ, ಜಯಪ್ರಕಾಶ್ ಬಾದಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಉದ್ಯೋಗ ಮೇಳದಲ್ಲಿ 2890 ಅಭ್ಯರ್ಥಿಗಳು ಭಾಗವಹಿಸಿದ್ದರು, ಒಂದು ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ದೊರೆತಿದೆ.

  • Related Posts

    ನಿರ್ವಾಕನ ಮೇಲೆ ಹಲ್ಲೆ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

    ನಿರ್ವಾಕನ ಮೇಲೆ ಹಲ್ಲೆ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ಧಾರವಾಡ 25 : ಬೆಳಗಾವಿಯ ಜಿಲ್ಲೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆಯವತಿಯಿಂದ ಧಾರವಾಡದ ಜಿಲ್ಲಾಧಿಕಾರಿಗಳ ಮುಖಾಂತರ ಸಾರಿಗೆ ಸಚಿವರಾದ…

    ಧಾರವಾಡ ಮಹಾನಗರ ಪಾಲಿಕೆಗೆ ಬಿಜೆಪಿಯಿಂದಲೇ ಅಡ್ಡಗಾಲು : ಏಗನಗೌಡರ ಆರೋಪ

    ಧಾರವಾಡ 25 : ಧಾರವಾಡ ಮಹಾನಗರ ಪಾಲಿಕೆ ಗೆ ಬಿಜೆಪಿಯಿಂದಲೇ ಅಡ್ಡಗಾಲಾಗಿದೆ ಎಂದು ಕಿಡಿಕಾರಿದ ಅರವಿಂದ ಏಗನಗೌಡರ ಕಿಡಿಕಾರಿದರು ಅವರು ಪತ್ರಿಕಾಗೋಷ್ಠಿ ಮಾತನಾಡಿ, ಧಾರವಾಡ ಮಹಾನಗರ ಪಾಲಿಕೆಗೆ ಈಗಾಗಲೇ ರಾಜ್ಯ ಕಾಂಗ್ರೆಸ್ ಸರಕಾರ ಅನುಮೋದನೆ ನೀಡಿ ಗೆಜೆಟ್ ಹೊರಡಿಸಿದ್ದು ಧಾರವಾಡದ ಸಮಸ್ತ…

    RSS
    Follow by Email
    Telegram
    WhatsApp
    URL has been copied successfully!