3 ರಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ.

ಧಾರವಾಡ 01 : ಬಡವರ ಶ್ರಮಿಸಿದ ಹಾಗೂ ಗ್ರಾಮೀಣ ವಿದೇಶದ , ಮಕ್ಕಳು , ಶಿಕ್ಷಣದಿಂದ ವಂಚಿತರಾಗಬಾರದ ಮಹೋದ್ದೇಶದಿಂದ ನಾಮದ ಜನಕ , ನಾಡುಮೆಚ್ಚಿದ ಜನನಾಯಕ, ಸಹಕಾರ ರಂಗದ ಭಿಷ್ಮ ಕೆ.ಎಚ್.ಪಾಟೀಲರು ಕಟ್ಟಿದ ನಗರದ ಸಪ್ತಾಪ್ತರದಲ್ಲಿರುವ ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಇದೀಗ ಸವರ್ಣ ಮಹೋತ್ಸವ ಆಚರಿಸುತ್ತಿದೆ ಎಂದು ವೇಮನ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ರಮೇಶ ಜಂಗಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ದಿ. 3 ರಂದು ಸಂಜೆ 4 ಗಂಟೆಗೆ ಸಪ್ತಾಪೂರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಜರುಗುವ ಸುವರ್ಣ ಮಹೋತ್ಸವ ಸಮಾರಂಭವನ್ನು ರಾಜ್ಯದ ಕಾನೂನು , ನ್ಯಾಯ , ಮಾನವ ಹಕ್ಕುಗಳು , ಶಾಸನ ರಚನೆ , ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲರು ಉದ್ಘಾಟಿಸುವರು ಎಂದರು.

ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಉಪಸ್ಥಿತಿಯಲ್ಲಿ ಜರುಗುವ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟಿನ ನ್ಯಾಯ ಮೂರ್ತಿ ರವಿ ಹೊಸಮನಿ ಮುಖ್ಯ ಅತಿಥಿಗಳಾಗಿ ಆಗಮಿಸುವರು . ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್.ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು . ಶಾಸಕ ಎನ್‌.ಎಚ್‌ . ಕೋನರೆಡ್ಡಿ ಅತಿಥಿಗಳಾಗಿ ಆಗಮಿಸುವರು . ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಹೆಸರಾಂತ ನ್ಯಾಯವಾದಿಗಳು ಹಾಗೂ ರಡ್ಡಿ ಸಹಕಾರ ಬ್ಯಾಂಕಿನ ಚೇರಮನ್ ಕೆ.ಎಲ್‌.ಪಾಟೀಲರನ್ನು ಸನ್ಮಾನಿಸಲಾಗುವದು . ವೇಮನ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಿ.ಆರ್ .ಪಾಟೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.

ಬಡವರ ಜ್ಞಾನ ದಾಸೋಹ ಶಾಲೆ ಎಂದ ಗುರುತಿಸಿಕೊಂಡಿರುವ , ದೇಮನ ವಿದ್ಯಾವರ್ಧಕ ಸಂಘದ ಈ ಶಾಲೆ ಬಾಲಕಿಯರ ಪ್ರೌಢಶಾಲೆಯಾಗಿ ಆರಂಭಗೊಂಡು , ಈಗ ಶಿಕ್ಷಣ ಸಂಸ್ಥೆಗಳ ಸಮೂಹವಾಗಿ ಮಾರ್ಪಟ್ಟು ಹೆಮ್ಮರವಾಗಿ ‌ ಬೆಳೆಯುತ್ತಿದೆ . ಶಿಶು ವಿಹಾರದಿಂದ ಹಿಡಿದು ಪದವಿ ಪೂರ್ವ ಕಾಲೇಜುವರೆಗೆ ಶಿಕ್ಷಣ ನೀಡಲಾಗುತ್ತಿದೆ , ಅತ್ಯಾಧುನಿಕ ಸಲಕರಣೆ ಸೌಲಭ್ಯಗಳೊಂದಿಗೆ ನುರಿತ ಸಿಬ್ಬಂದಿ ಹಾಗೂ ಸಮರ್ಥ ಆಡಳಿತ ಮಂಡಳಿಯಿಂದಾಗಿ ಸಂಸ್ಥೆ ಶಿಕ್ಷಣ ಕಾಶಿಯಲ್ಲಿ ಮೌನ ಕ್ರಾಂತಿ ಮಾಡುತ್ತಿದೆ ಎಂದರು.

ಸಮಾರಂಭಕ್ಕೆ ಸರ್ವರಿಗೆ ಆಮಂತ್ರಣವಿದ್ದು , ಶಿಕ್ಷಣ ಪ್ರೇಮಿಗಳು , ಸಹಕಾರಿಗಳು ಸಂಸ್ಥೆಯ ಸದಸ್ಯರು ಹಾಗೂ ಹಿತೈಷಿಗಳು ಆಗಮಿಸಲು ವಿನಂತಿಸಿಕೊಳ್ಳುತ್ತೇವೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಆಡಳಿತ ಮಂಡಳಿ ಚೇರಮನ್ ಕೆ.ವಿ.ತಿಮ್ಮಾಪೂರ ಗೌರವ ಎಸ್‌.ಬಿ.ಮುದಿಗೌಡರ , ಕಾರ್ಯಾಧ್ಯಕ್ಷ ಕೆ.ಎಸ್‌.ಪಾಟೀಲ ಸದಸ್ಯರಾದ ಎ.ಜಿ.ಮುಳ್ಳೂರ , ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಿ . ದ್ವಿ , ನವಲಗುಂದ , ಕೆ.ಎಸ್.ಕರ್ಲವಾಡ , ಎಸ್.ಎಚ್.ಪಾಟೀಲ , ಶ್ರೀಮತಿ ಪುಷ್ಪಾ ಯಮನೂರ , ಎನ್.ವಿ.ಕೆರಕಲಮಟ್ಟಿ , ಡಾ.ಬಿ.ವಿ.ಪಾಟೀ ಪಿ.ಕೆ.ಹೂಲಿಹಳ್ಳಿ , ಎಲ್.ಎಚ್.ಮಲ್ಲಿಗವಾಡ ಇನ್ನಿತರು ಉಪಸ್ಥಿತರಿದ್ದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!