ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕು ಶರೇ ವಾಡ ಗ್ರಾಮದಲ್ಲಿ ಎಸ್ ಜೆ ಎಮ್ ವಿ ಎಸ್ ಮಹಿಳಾ ಮಹಾವಿದ್ಯಾಲಯದ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನ ಸಸಿ ನೆಟ್ಟು ‘ಆರೋಗ್ಯವೇ ಭಾಗ್ಯ’ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ ಎನ್ ಎಸ್ ಎಸ್ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ ಎಂದರು.

ಪ್ರೊ. ಎಸ್ ಎಚ್ ಹಿರೇಗೌಡರ ಆರೋಗ್ಯವೇ ಭಾಗ್ಯ ಕುರಿತು ಉಪನ್ಯಾಸ ನೀಡಿ ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಆರೋಗ್ಯ ಕೆಡುತ್ತದೆ. ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ , ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಳ್ಳೆಯ ಆಲೋಚನೆ ಹೊಂದಬೇಕು. ಮೊಬೈಲನ್ನು ಮಿತವಾಗಿ ಬಳಸಬೇಕು ಎಂದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಡಾ. ಎಚ್ ವಿ ಬೆಳಗಲಿ, ಸಿದ್ದಪ್ಪ ಹನ್ನಿ, ವಿರೂಪಾಕ್ಷಪ್ಪ ಯಡವನ್ನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಡಾ. ಶಿವಲೀಲಾ ವೈಜಿನಾಥ ಸ್ವಾಗತಿಸಿದರು. ಡಾ. ತಾಯಣ್ಣ ಎಚ್, ಶ್ರೀಮತಿ ಮಮ್ತಾಜ್ ಬೇಗಂ ತಹಸೀಲ್ದಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸೌಂದರ್ಯ ನೂಲ್ವಿ ನಿರೂಪಿಸಿದರು. ಎನ್ ಎಸ್ ಎಸ್ ಸ್ವಯಂ ಸೇವಕಿಯರು ಎನ್ ಎಸ್ ಎಸ್ ಗೀತೆ ಪ್ರಸ್ತುತ ಪಡಿಸಿದರು. ಅನಿತಾ ಹಂಡೆ ನವರ್ ವಂದಿಸಿದರು.