ಯುವಕರಲ್ಲಿ ದೇಶ ಪ್ರೇಮ ಬೆಳೆಸಲು ಎನ್ ಎಸ್ ಎಸ್ ಸಹಕಾರಿ – ಡಾ.ಜಾವೀದ್ ಜಮಾದಾರ.
ಧಾರವಾಡ 16 : ಯುವ ಜನರಲ್ಲಿ ದೇಶಪ್ರೇಮ‌ ಬೆಳೆಸುವಲ್ಲಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಎನ್.ಎಸ್.ಎಸ್ ಯೋಜನೆ ಬಹಳ‌ ಪೂರಕವಾಗಿದೆ ಎಂದು ನವದೆಹಲಿಯ ವರ್ಲ್ಡ್ ಯೂತ್ ಆರ್ಗನೈಸೇಷನ್‌ ಅಧ್ಯಕ್ಷರಾದ ಡಾ.ಜಾವೀದ್ ಜಮಾದಾರ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿಶ್ವವಿದ್ಯಾಲಯ ಎನ್‌.ಎಸ್.ಎಸ್.ಕೋಶವು ಕವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ ಏಳು ದಿನಗಳ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವದ ತರಬೇತಿ ಶಿಬಿರದ ಸಮಾರೋಪ ಭಾಷಣ ಮಾಡಿ ಮಾತನಾಡಿದರು.

ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ವನ್ನು ಹೆಚ್ಚುಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದಿನ ಯುವಕರಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ನಾಯಕತ್ವದ ಅವಶ್ಯಕತೆ ಇದೆ ಎಂದು ಅವರು
ರಾಜ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ ದೇಶಕ್ಕೆ ‌ಮಾದರಿ ಆಗಿದೆ. ಎಂದ ಅವರು ವಿದ್ಯಾರ್ಥಿಗಳು ದೇಶದ ಆಸ್ತಿ ಆದ್ದರಿಂದ ಸಮಾಜಮುಖಿ ಪ್ರವೃತ್ತಿಯನ್ನು ಎನ್.ಎಸ್.ಎಸ್ ಮೂಲಕ‌ ಬೆಳಸಿಕೊಳ್ಳಬೇಕು ಎಂದ ಅವರು ಸಮಾಜದಲ್ಲಿ ಪ್ರಖರವಾಗಿ ಗುರುತಿಸಿಕೊಳ್ಳಲು ಎನ್.ಎಸ್.ಎಸ್ ಬಹಳ ಪ್ರಯೋಜನಕಾರಿ ಆಗಿದೆ ಎಂದರು. ಸದ್ಯದಲ್ಲಿ ದೇಶದಲ್ಲಿ ಯುವ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ರಾಬರ್ಟ್‌ ದದ್ದಾಪೂರಿ ತಂದೆ ತಾಯಿ, ಹಿರಿಯ ಗುರುಗಳನ್ನು ಗೌರವಿಸುವ ಸಂಸ್ಕಾರ ಕಲಿಯಬೇಕು. ದೇಶಪ್ರೇಮ ಬೆಳೆಸಿಕೊಳ್ಳಬೇಕು, ವ್ಯಕ್ತಿತ್ವವನ್ನು ಬೆಳೆಸಿಕೊಂಡು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ ಗೊರವರ ಮಾತನಾಡಿ ನಾಯಕತ್ವದ ಶಿಬಿರದ ಪ್ರಯೋಜನವನ್ನು ಸಮರ್ಪಕವಾಗಿ ‌ಪಡೆದುಕೊಂಡು ಭಿನ್ನವಾಗಿ ಗುರುತಿಸಿಕೊಳ್ಳಿ, ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ‌ಶಿಸ್ತು ಬದಲವಾಣೆಯನ್ನು ತರುತ್ತದೆ ಎಂದ ಅವರು ದೇಶದ ಯುವಕರಲ್ಲಿ ಉತ್ತಮ ಮೌಲ್ಯಗಳನ್ನು ಬೆಳಸುವಲ್ಲಿ ಎನ್.ಎಸ್.ಎಸ್ ಬೆಳಸುತ್ತದೆ ಎಂದರು. ಯುವ ಜನರು ವೈಜ್ಞಾನಿಕ ಚಿಂತನೆಯನ್ನು ಬೆಳಸಿಕೊಳ್ಳಬೇಕು ಎಂದರು. ನಕಾರಾತ್ಮಕ ವಿಚಾರಗಳಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಎನ್‌.ಎಸ್.ಎಸ್.ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ ಮಾತನಾಡಿ ರಾಜ್ಯದಲ್ಲೇ ಕರ್ನಾಟಕ ವಿಶ್ವದ್ಯಾಲಯದಲ್ಲಿ ಸುಮಾರು 19,500 ಸ್ವಯಂ ಸೇವಕರಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಎನ್.ಎಸ್.ಎಸ್.ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ದೇಶದಲ್ಲಿ ಮಾದರಿ ವಿಶ್ವವಿದ್ಯಾಲಯ ಆಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಉತ್ತಮ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಮತ್ತು ಅಧಿಕಾರಿಗಳಿಗೆ ಡಾ.ಡಿ.ಸಿ.ಪಾವಟೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದ ಅವರು ಸುಮಾರು 6000 ಹಳ್ಳಿಗಳಲ್ಲಿ ಶೌಚಾಲಯಗಳನ್ನು ಎನ್.ಎಸ್.ಎಸ್ ಮೂಲಕ ನಿರ್ಮಿಸಲಾಗಿದೆ. ಗ್ರಾಮಗಳಲ್ಲಿರುವ ಕೆರಗಳನ್ನು ದತ್ತು ತೆಗೆದುಕೊಂಡು ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವರಾದ ಡಾ.ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ. ನಾಯಕನಾದವನು ಮಹತ್ವಾಕಾಂಕ್ಷೆಯ ಒಳಗೊಂಡಿರಬೇಕು, ಕ್ರಿಯಾಶೀಲತೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿರಬೇಕು.‌ ಸಾಮಾನ್ಯ ವ್ಯಕ್ತಿ ನಾಯಕನಾಗ ಬೇಕಾದರೆ ಅನೇಕ ಸವಾಲುಗಳಿವೆ ಅವುಗಳನ್ನು ಮೆಟ್ಟಿನಿಂತು ನಾಯಕನಾಗಿ ಹೊರಹೊಮ್ಮಬೇಕು ಎಂದರು. ನಿಜವಾದ ನಾಯಕನಾದವನು ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಮನಸ್ಥಿತಿ ಹೊಂದಿರಬೇಕು. ಬುದ್ದ, ಬಸವ.ಅಂಬೇಡ್ಕರ್, ಗಾಂಧಿ, ಮಹಾವೀರ ಎಲ್ಲರೂ ನಮಗೆ ನಾಯಕರು ಎಂದರು.

ಇದೇ ಸಂದರ್ಭದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳು ಮತ್ತು ಎನ್.ಎಸ್. ಎಸ್ ಸ್ವಯಂ ಸೇವಕರು ಏಳು ದಿನಗಳ ‌ಕಾಲ‌ ನಡೆದ ನಾಯಕತ್ವ ಶಿಬಿರದ ಕುರಿತು ಅನಿಸಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಡಾ‌.ಎನ್ ಎಸ್ ತಳವಾರ, ಡಾ‌.ಎಸ್.ಎಸ್.ದೊಡಮನಿ, ಪ್ರೊ.ಕೊಟಬಾಗಿ, ಪ್ರೊ.ಮಂಜುನಾಥ, ಪ್ರೊ.ರವಿ ಶೇಷಗಿರಿ, ಪ್ರೊ.ದಯಾನಂದ ಹಟ್ಟಿ, ಪ್ರೊ. ಶಿವಯೋಗಿ ಹಾವೇರಿ, ಕಚೇರಿ ಸಹಾಯಕ ನಿಂಗರಾಜ್ ಸೇರಿದಂತೆ ಎನ್.ಎಸ್.ಎಸ್ ಸ್ವಯಂ ಸೇವಕರು ಇದ್ದರು.