ಧಾರವಾಡ 10 :– ಹೌಸ್ಪಸೀಸ್ ಟ್ರಸ್ಟ್, ಹುಬ್ಬಳ್ಳಿ ಇವರು ನವನಗರದ ಪ್ರಜಾನಗರ, ಎಮ್.ಐ.ಜಿ 110 ರಲ್ಲಿ ಕ್ಯಾನ್ಸರ್‌ ನಿಂದ ಜಯಿಸಿದವರು ಅವರಿಗಾಗಿ ಜೂನ ಮೊದಲನೆಯ ರವಿವಾರದಂದು ಪ್ರತಿ ವರ್ಷ ಅಂತರ ರಾಷ್ಟ್ರೀಯ ಕ್ಯಾನ್ಸರ್ ಜಯಿಸಿದವರ ದಿನವನ್ನು ಆಚರಿಸಲಾಗುತ್ತಿದ್ದು ಈ ವರ್ಷವೂ ಜೂನ್ 1 ನೇಯ ತಾರೀಕಿನ ದಿನ ಕ್ಯಾನ್ಸರ್ ಜಯಿಸಿದವರಿಗಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಟ್ರಸ್ಟನ ಮಾಜಿ ಅಧ್ಯಕ್ಷರಾದ ಡಾ. ಬೋನಾಶ್ರೀ ಡೇಖಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಕ್ಯಾನ್ಸರ್ ಜಯಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪೀಡಿತ ಜನರಿಗಾಗಿ ದೈರ್ಯವನ್ನು ತುಂಬಿ, ತಪಾಸಣೆ ಮತ್ತು ಚಿಕಿತ್ಸೆಗೆ ಪ್ರೋತ್ಸಾಹಿಸಿ ಚಿಕಿತ್ಸೆ ಪಡೆಯುವಂತೆ ಆತ್ಮ ವಿಶ್ವಾಸ ತುಂಬಿದರು.

ನಂತರ ಟ್ರಸ್ಟನ ಕಾರ್ಯದರ್ಶಿಗಳಾದ ಡಾ. ಎ.ಸಿ. ಡೇಖಾ ಅವರು ಕ್ಯಾನ್ಸರ್ ಜಯಿಸಿದ ಮಹನೀಯರನ್ನು ಸನ್ಮಾನಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ರವಿ.ಭಜಂತ್ರಿಯವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ನವನಗರ ಸದಸ್ಯರು, ರೋಟರಿ ನವನಗರ ಶಾಲೆಯ ಶಿಕ್ಷಕರು ಹಾಗೂ ನವನಗರದ ನಾಗರೀಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.