ಧಾರವಾಡ 10 : ಯುನೆಸ್ಕೋ ಸಹಕಾರದಲ್ಲಿ , ಅಖಿಲ ಭಾರತೀಯ ಸಾಂಸ್ಕೃತಿಕ ಸಂಘ , ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಿದ್ದ 2025 ನೇ ಸಾಲಿನ , 21 ನೇ ಪ್ರದರ್ಶಕಗಳ ಕಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ಆರೋಹಿ ಸದಾಶಿವ ಐಹೊಳ್ಳಿ ಕಥಕ್ ನೃತ್ಯ ಪ್ರದರ್ಶನದಲ್ಲಿ , ರಾಷ್ಟ್ರ ಮಟ್ಟದ ದ್ವಿತೀಯ ಸುರಸ್ವಾರಕ್ಕೆ ಭಾಜನರಾಗಿದ್ದಾರೆ .

ಅಕ್ಟೋಬರ್ 25 ರಿಂದ 29 ರ ವರೆಗೆ , ಥೈಲ್ಯಾಂಡ್‌ನ ಪೆಟ್ಟಾಯಾದಲ್ಲಿ , ಬುರಾಧಾ ವಿಶ್ವವಿದ್ಯಾಲಯದ , ಕಲೆ ಹಾಗೂ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿತ , 15 ನೇ ಕಲ್ಬರಲ್ ಒಲಿಂಪಿಯಾಡ್ ಫಾರ್ ಆರ್ಟ್ ಅಂಡ್ ಕಲ್ಟರ್ , ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆರೋಹಿ ಆಯ್ಕೆಯಾಗಿದ್ದು , ಕಥಕ್ ನೃತ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ , ಪ್ರದರ್ಶನ ನೀಡಲಿದ್ದಾರೆ.

‌‌ ಶ್ರೀ ಸತ್ಯ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ , ಪಿಯೂಸಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ , ವ್ಯಾಸಂಗ ನಿರತ ಆರೋಹಿ , ಶಾಂತಲಾ ನೃತ್ಯಾಲಯದ , ನೃತ್ಯ ಗುರು ವಿದುಷಿ ವಿಜೇತಾ ವೇರ್ಣೇಕರ ಅವರಲ್ಲಿ ಕಳೆದ 11 ವರ್ಷಗಳಿಂದ , ಭರತನಾಟ್ಯ ಹಾಗೂ ಕಥಕ್ ನೃತ್ಯಾಭ್ಯಾಸದಲ್ಲಿ ತೊಡಗಿದ್ದು , ರಾಷ್ಟ್ರೀಯ ನೃತ್ಯ ಪರೀಕ್ಷೆಗಳನ್ನು , ಉನ್ನತ ಶ್ರೇಣಿಯಲ್ಲಿ , ಉತ್ತೀರ್ಣರಾಗಿದ್ದಾರೆ.

ಧಾರವಾಡ ಆಕಾಶವಾಣಿಯ ಉನ್ನತ ಶ್ರೇಣಿಯ ಗಾಯಕ ಹಾಗೂ ನಿಲಯ ಕಲಾವಿದರಾದ , ಪಂ . ಸದಾಶಿವ ಐಹೊಳ್ಳಿ ಅವರ ಕಿರಿಯ ಪುತ್ರಿಯಾಗಿದ್ದು , ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಅಧ್ಯಯನ ನಿರತರಾಗಿದ್ದಾರೆ .
ಶಾಂತಲಾ ನೃತ್ಯಾಲಯ , ಶ್ರೀ ಸತ್ಯ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ಗುರುವೃಂದ ಹಾಗೂ ಆಕಾಶವಾಣಿ ಅಧಿಕಾರಿ ವರ್ಗ , ಆರೋಪಿ ಐಹೊಳ್ಳಿ ಅವರನ್ನು ಅಭಿನಂದಿಸಿದ್ದಾರೆ.