ಎ ಎಸ್ ಐ ಬಸವರಾಜ ಕುರಿ ಅವರಿಂದ ಶಹರ ಪೋಲೀಸ ಠಾಣೆಯ ಧ್ವಜಾರೋಹಣ.

 ಧಾರವಾಡ 27 : ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಗಣರಾಜ್ಯ ದಿನವನ್ನು ಆಚರಿಸಲಾಯಿತು.

ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸುವುದು ವಾಡಿಕೆ. ಆದರೆ, ಶಹರ ಠಾಣೆಯ ಸಿಪಿಐ ಎನ್.ಎಸ್.ಕಾಡದೇವರ ಅವರು, ಠಾಣೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತಮಗಿಂತ ಕೆಳ ಹಂತದಲ್ಲಿರುವ
ಎಎಸ್ಐ ಬಸವರಾಜ ಕುರಿ ಅವರಿಂದ ಧ್ವಜಾರೋಹಣ ನೆರವೇರಿಸಿ ಸಂಭ್ರಮಿಸಿದರು.

ಸಿಪಿಐ ಕಾಡದೇವರ ಅವರು ತಮ್ಮನ್ನು ಧ್ವಜಾರೋಹಣಕ್ಕೆ ಆಮಂತ್ರಿಸಿದ್ದರಿಂದ ಒಂದು ಕ್ಷಣ ಆಶ್ಚರ್ಯಚಕಿತರಾದರು ,ಅಲ್ಲದೇ ಧ್ವಜಾರೋಹಣ ಮಾಡಲು ನಮ್ರತೆಯಿಂದ ನಿರಾಕರಿಸಿದ ಕುರಿ ಅವರು, ನೀವೇ ಧ್ವಜಾರೋಹಣ ನಡೆಸಲು ಕಾಡದೇವರ ಅವರಲ್ಲಿ ವಿನಂತಿಸಿದರು.
ಆದರೂ, ಪಟ್ಟುಬಿಡದ ಕಾಡದೇವರ ಅವರು ಕುರಿಯವರ ಹಸ್ತದಿಂದ ಧ್ವಜಾರೋಹಣ ನೆರವೇರಿಸಿ ಸಂಭ್ರಮಿಸಿದರು.

ಮುಂದಿನ ತಿಂಗಳು ಸೇವೆಯಿಂದ ನಿವೃತ್ತಿ ಹೊಂದಲಿರುವ ಎಎಸ್ಐ ಬಸವರಾಜ ಕುರಿ ಅವರಿಂದ ಧ್ವಜಾರೋಹಣ ನಡೆಸುವ ಮೂಲಕ ಔದಾರ್ಯ ಮೆರೆದ ಸಿಪಿಐ ಕಾಡದೇವರ ಅವರ ನಡೆಯನ್ನು ಎಲ್ಲ ಸಿಬ್ಬಂದಿ ಮೆಚ್ಚಿ ಖುಷಿ ಪಟ್ಟರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!