ಶಿಸ್ತು,ಸಮಯ ಪ್ರಜ್ಞೆ, ಕಠಿಣ ಪರಿಶ್ರಮ ಕಾನೂನು ವಿದ್ಯಾರ್ಥಿಗಳಿಗೆ ಅಗತ್ಯ ನ್ಯಾಯಾಧೀಶೆ ಪೂರ್ಣಿಮಾ ಪೈ ಅಭಿಮತ.

ಧಾರವಾಡ 16 : ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು ಸಮಯ ಪ್ರಜ್ಞೆ, ಹಾಗೂ ಕಠಿಣ ಪರಿಶ್ರಮಗಳ ಮೂಲಕ ಕಾನೂನು ಉತ್ತಮ ನ್ಯಾಯವಾದಿ,ಮತ್ತು ಕಾನೂನು ಕ್ಷೇತ್ರದ ಉನ್ನತ ಸ್ಥಾನಮಾನಗಳನ್ನು ಹೊಂದಲು ಸಾದ್ಯವಿದೆ ಎಂದು ಧಾರವಾಡ ನಾಲ್ಕನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಪೂರ್ಣಿಮಾ ಪೈ ಅವರು ಹೇಳಿದರು.

ಅವರು ನಗದ ಕವಿವಯ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜ್ ವತಿಯಿಂದ ಕ.ವಿ. ಮಾನಸೋಲ್ಲಾಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ವಾರ್ಷಿಕ ಸಾಂಸ್ಕೃತಿಕ ಹಬ್ಬ” ‘ಸಂಪ್ರದಾ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜ್ ದೇಶದ ನ್ಯಾಯಾಂಗ ಕ್ಷೇತ್ರಕ್ಕೆ ಅತ್ಯಂತ ಅಮೂಲ್ಯ ರತ್ನದಂತಹ ವ್ಯಕ್ತಿಗಳನ್ನು ನೀಡಿದೆ, ಇಂಥ ಭವ್ಯ ಪರಂಪರೆಯ ಕಾಲೇಜನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು,ನಿರಂತರ ಅದ್ಯಯನ, ಜನಮುಖಿ ಕಾರ್ಯಗಳಿಂದ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಬೇಕು ಎಂದು ಹಾರೈಸಿದರು.

ಮೊಬೈಲ್ ಅನ್ನು ಕೇವಲ ಜ್ಞಾನ ಸಂಪಾಧನೆ ಮತ್ತು ಸ್ಪೂರ್ತಿದಾಯಕ ವಿಚಾರಗಳಿಗೆ ಮಾತ್ರ ಬಳಸಿ ಬದಲಾಗಿ ಅನವಶ್ಯಕ ಚಾಟಿಂಗ್ ಮಾಡೋದು ಬೇಡ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ ಅವರು ಮಾತನಾಡಿ ಕಾನೂನು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಪ್ರಗತಿ ಹೊಂದಲು ಹಲವಾರು ರಂಗಗಳಲ್ಲಿ ಅವಕಾಶಗಳು ಮುಕ್ತವಾಗಿವೆ ಕಠಿಣ ಪರಿಶ್ರಮ ಬಿಟ್ಟರೆ ಯಶಸ್ಸಿಗೆ ಬೇರೆ ದಾರಿಯಿಲ್ಲ.

ಕಲಿತ ವಿದ್ಯಾ ಸಂಸ್ಥೆಯ ಬಗ್ಗೆ ಭಕ್ತಿ-,ಗೌರವ ಇರಬೇಕು ಈ ವರೆಗೂ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೆಜನಲ್ಲಿ ಕಲಿತ ವಿದ್ಯಾರ್ಥಿಗಳು ಸಂಸ್ಥೆಯ ಋಣ ತೀರಿಸಬೇಕು ಕೀರ್ತಿ ಉಳಿಸಿ-ಬೆಳೆಸಬೇಕೆಂದು ನುಡಿದರು.

ಕ.ವಿವಿಯ ಕಾಲೇಜ್ ಪ್ರಾಚಾರ್ಯ ಡಾ.ಎಸ್.ಅರ್.ಮಂಜುಳಾ ಅದ್ಯಕ್ಷತೆ ವಹಿಸಿದ್ದರು.
ಹೆಚ್.ಸಾಧಿಕ,ಅತಿಥಿ ಉಪನ್ಯಾಸಕ ಕೆ.ಎಸ್.ಕೊರಿಶೆಟ್ಟರ,ವಿದ್ಯಾರ್ಥಿ ಘಟಕದ ಜಿ.ಎಸ್.ವಿಜಯ ಕೃಷ್ಣಾ ಕೊಳ್ಳಾನಟ್ಟಿ ಉಪಸ್ಥಿತರಿದ್ದರು.

ಜಿಮಾಖಾನ ಯುನಿಯನ್ ಅದ್ಯಕ್ಷೆ ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು.
ಪ್ರಣವ ಕುಲಕರ್ಣಿ ಹಾಗೂ ಧ್ರತಿ ಭಟ್ಟ ನಿರೂಪಿಸಿದರು.
ಅಂಕಿತಾ ತಳವಾರ ವಂದಿಸಿದರು.