ಧಾರವಾಡ 02 : ಕ್ಷುಲ್ಲಕ ಕಾರಣಕ್ಕೆ ಎರಡು ಅಕ್ಕಪಕ್ಕದ ಮನೆಯವರು ಪರಸ್ಪರ ಬಡಿದಾಡಿಕೊಂಡ ಘಟನೆ ಧಾರವಾಡದ ಸವದತ್ತಿ ರಸ್ತೆಯ ಗೊಲ್ಲರ ಕಾಲನಿಯಲ್ಲಿ ಜನೆವರಿ 1ರ ರಾತ್ರಿ ನಡೆದಿದೆ.
ಭೋವಿ ಮತ್ತು ಗೊಲ್ಲರ ಸಮುದಾಯಗಳ ನಡುವೆ ಜಗಳವಾಗಿದ್ದು, ಜಗಳದಲ್ಲಿ ಇಟ್ಟಿಗೆಗಳಿಂದ ತೂರಾಡಿಕೊಂಡಿದ್ದಾರೆ.
ಆಟೋರಿಕ್ಷಾ ಹೊರಟಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಡ್ಡವಾಗಿದ್ದು, ಚೂರು ಸರಿಸಿರಿ ಎಂದಿದ್ದಕ್ಕೆ ಕ್ಷುಲ್ಲಕ ಕಾರಣದಿಂದ ಜಗಳ ಶುರುವಾಗಿ ತಾರಕ್ಕೇರಿದ ಪರಿಣಾಮ ಇಟ್ಟಂಗಿ, ಇನ್ನಿತರ ವಸ್ತುಗಳಿಂದ ಹೊಡೆದಾಡಿಕೊಂಡಿದ್ದಾರೆ. ಜಗಳದಲ್ಲಿ ರಾಜು ಮುಧೋಳ ಹೆಚ್ಚು ಗಾಯವಾಗಿದ್ದು ತದನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯಲ್ಲಿ ರಾಜು ಮುಧೋಳ ಮತ್ತು ಸಂತೋಷ ಗೊಲ್ಲರ ಎಂಬುವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಗೊಲ್ಲರ ಕುಟುಂಬದ ಹುಲಗಪ್ಪ, ವಿಠಲ, ಕುಮಾರ, ಭೀಮಪ್ಪ, ಮಣಿಕಂಠ ಮತ್ತು ಸಂತೋಷನನ್ನು ಬಂಧಿಸಲಾಗಿದೆ ಎಂದು ಧಾರವಾಡ ಶಹರ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.