ಹೆಬ್ಬಳ್ಳಿಯಲ್ಲಿ ಆಧಾರ ತಿದ್ದುಪಡಿ ಕೇಂದ್ರ ಆರಂಭ

ಧಾರವಾಡ 02 : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಆಗಲಿ ಎಂಬ ಸದುದ್ದೇಶದಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಭೀಮಕ್ಕನವರ ಶಾಲಾ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಆಧಾರ ತಿದ್ದುಪಡಿ ಶಿಬಿರವನ್ನು, ಮಕ್ಕಳ ಅಧಾರ ತಿದ್ದುಪಡಿ ಮಾಡುವ ಮೂಲಕ ಚಾಲನೆ ನೀಡಿ, ಅಪರ ಐಡಿ ಹೊಸ ಒಂದು ದೇಶ ಒಂದು ಗುರುತಿನ ಚೀಟಿ ಯೋಜನೆಯಾದ ಅಪರ ಐಡಿ,ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ತಿಳಿಯಲು ಬಹುಮುಖ್ಯ ಪಾತ್ರ ವಹಿಸಲಿದ್ದು, ಸದರಿ ಕಾರ್ಯಕ್ಕೆ ಆಧಾರ ತಿದ್ದುಪಡಿ ಅಗತ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ ಆರ್ ಪಿ ನರಸಿಂಹ ಮೂರ್ತಿ ರಾಜೂರ ಮಾತನಾಡಿ, ಹೆಬ್ಬಳ್ಳಿ ಗ್ರಾಮ ಪಂಚಾಯತಿ ಮತ್ತು ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು ತುಂಬಾ ಮುತುವರ್ಜಿಯಿಂದ, ಶಾಲಾ ಮಕ್ಕಳಿಗೆ ಅನುಕೂಲ ಆಗಲಿ, ಮತ್ತು ಕೂಲಿಕಾರ್ಮಿಕರ ಮಕ್ಕಳು ಕೃಷಿಕೂಲಿ ಮಾಡುವ ಹಾಗೂ ರೈತರುಗಳಿಗೆ ತಮ್ಮ ಮಕ್ಕಳಿಗೆ ನಗರಕ್ಕೆ ಕರೆದುಕೊಂಡು ಹೋಗಿ ಆಧಾರ ತಿದ್ದುಪಡಿ ತುಂಬಾ ಕಷ್ಟದ ಕೆಲಸ ಈ ಒಂದು ಸನ್ನಿವೇಶದಲ್ಲಿ ಹೆಬ್ಬಳ್ಳಿ ಸಿ ಆರ್ ಪಿ ಎಂ ಎನ್ ಮುಲ್ಲಾನವರ ಗ್ರಾಮ ಪಂಚಾಯತಿ ಮತ್ತು ಶಾಲಾಭಿವೃದ್ದಿ ಸಮಿತಿಯ ಗಮನಕ್ಕೆ ತಂದು ಆಧಾರ ತಿದ್ದುಪಡಿ ಶಿಬಿರವನ್ನು ಹಳ್ಳಿಗೆ ತರುವಲ್ಲಿ ಸಿಆರ್ ಪಿ ಕಾರ್ಯ ಶ್ಲಾಘನೀಯ ಎಂದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮಾಧನಭಾವಿ ಎಂ ಸದಸ್ಯರಾದ ಬಾಳಪ್ಪ ಪ್ರಭಾಕರ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕೃಷ್ಣಾಜಿ ನಾಡಿಗೇರ, ಸದಸ್ಯರಾದ ಈರಣ್ಣ ಉಮನ್ನವರ ಬಸವರಾಜ ಬಡಿಗೇರ ಮೌಲಾಸಾಬ ಕೊಣ್ಣೂರ ಕವಿತಾ ಸುಣಗಾರ ನಿರ್ಮಲಾ ಮೊರಬದ ಮುಖ್ಯ ಗುರುಮಾತೆ ನಾಗರತ್ನ ಅಂಚಟಗೇರಿ, ರಾಜೀವ ಹಲವಾಯಿ, ಪ್ರಭಯ್ಯ ವಿರಕ್ತಮಠ ಚಿತ್ರಾ ಝಠಾರ, ಮುಂತಾದವರು ಇದ್ದರು.

ಸ್ವಾತಿ ಕೊಟಬಾಗಿ ವ್ಯವಸ್ಥಾಪಕರು ಆಧಾರ ಸೇವಾ ಕೇಂದ್ರ ಧಾರವಾಡ
ಅರುಣ ನವವಲೂರ ,ನರಸಿಂಹ ಮೂರ್ತಿ ರಾಜೂರ,ಎಮ್ ಎನ್ ಮುಲ್ಲಾನವರ , ಎಲ್ ಐ ಲಕ್ಕಮ್ಮನವರ ಹಾಜರಿದ್ದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!