ಧಾರವಾಡ 28 : ನಗರದ ಯಾಲಕ್ಕಿ ಶೆಟ್ಟರ್ ಕಾಲೊನಿಯ ಶಂಕರ ಮಠದ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮನ್ವಯ ಸಮಿತಿ ಸಭೆ ನಡೆದಿದೆ. ಎರಡು ದಿನಗಳ ಕಾಲ ಈ ಸಭೆ ನಡೆಯಲಿದೆ. ಈ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಆಗಮಿಸಿದ್ದಾರೆ . ನಿನ್ನೆ ಸಂಜೆಯೇ ಧಾರವಾಡಕ್ಕೆ ಬಂದಿದ್ದ ವಿಜಯೇಂದ್ರ ಇಂದು ಬೆಳಿಗ್ಗೆ ಶಂಕರ ಮಠಕ್ಕೆ ಆಗಮಿಸಿದ್ದಾರೆ . ವಿಜಯೇಂದ್ರ ಅವರಿಗೆ ಕಾರ್ಕಳ ಎಂಎಲ್ಸಿ ಸುನಿಲ್ ಕುಮಾರ್ ಕೂಡ ಸಾಥ್ ನೀಡಿದರು.
ವಿಜಯೇಂದ್ರ ಅವರು ಬೆಂಗಾವಲು ವಾಹನ ಇಲ್ಲದೇ ಶಂಕರ ಮಠಕ್ಕೆ ಬಂದಿದ್ದು , ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ಕೂಡ ನೀಡದೇ ಆರ್ಎಸ್ಎಸ್ ಸಭೆಗೆ ತೆರಳಿದರು.
ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ
ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…