ಆತ್ಮ ವಿಶ್ವಾಸ, ಸತತ ಪರಿಶ್ರಮ ಇವು ಯಶಸ್ಸಿನ ಸೂತ್ರಗಳು ಡಾ. ಲಿಂಗರಾಜ ಅಂಗಡಿ

ಧಾರವಾಡ : ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆ ಎಲ್ ಇ ಸಂಸ್ಥೆಯ ಆರ್ ಎಲ್ ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢ ಶಾಲೆ ವಿಭಾಗ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಸಾಪ್ತಾಹಿಕ ಸಾಹಿತ್ಯ ಮಾಲಿಕೆಯಡಿಯಲ್ಲಿ ಶ್ರೀಮತಿ ಭಾಗೀರಥಿ ಕೆ ದೇವರಮನಿ ಇವರ ಜನ್ಮ ದಿನ ಮತ್ತು ಇವರ ಮೊಮ್ಮಕ್ಕಳ ದತ್ತಿ ಹಾಗೂ ಮಂಜುನಾಥ ಶಂಕ್ರಣ್ಣ ಮುನವಳ್ಳಿ ದತ್ತಿ ಅಂಗವಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಗೀತ ಗಾಯನ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಲಿಂಗರಾಜ ಅಂಗಡಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರು ಮಾಡಿ ,ಆತ್ಮ ವಿಶ್ವಾಸದಿಂದ ಸತತ ಪರಿಶ್ರಮದಿಂದ ಅಧ್ಯಯನ ಮಾಡಿದಲ್ಲಿ ಪರೀಕ್ಷೆ ಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾ, ಕನ್ನಡ ಸಾಹಿತ್ಯ ಪರಿಷತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ ಇದರ ಸದುಪಯೋಗ ಮಾಡಿಕೊಳ್ಳಿ ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ಸಿಸ್ಲೆಪ್ ಧಾರವಾಡದ ಉಪನ್ಯಾಸಕರಾದ ಡಾ ಪೂರ್ಣಿಮಾ ಮುಕ್ಕುಂದಿ, ವಿದ್ಯಾರ್ಥಿಗಳು ಪರೀಕ್ಷಾ ಭಯ ದಿಂದ ಹೊರಬರಬೇಕು.. ಸಮಯ ಪರಿಪಾಲನೆ ವಯಕ್ತಿಕ ವೇಳಾಪಟ್ಟಿ ಹಾಕಿಕೊಳ್ಳಿ ಸತತ ಪ್ರಯತ್ನ ಮಾಡಿ ಮನಸ್ಸಿಟ್ಟು ಓದಿ, ಅಂದಾಗ ಪರೀಕ್ಷೆಯಲ್ಲಿ ಭಯ ಬರುವುದೇ ಇಲ್ಲ ಎಂದರು… ದತ್ತಿ ದಾನಿಗಳು ಆದ ಶ್ರೀ ಕೆ ಜಿ ದೇವರಮನಿ ಇವರು ಮಕ್ಕಳಿಗೆ ಗಣಿತ ವಿಷಯ ಕುರಿತು ಮನವರಿಕೆ ಮಾಡಿ ಪ್ರೋತ್ಸಾಹಕ ಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಎಂ ಎ ಭಾವಿಕಟ್ಟಿ ನಿವೃತ್ತ ಮುಖ್ಯಾಧ್ಯಾಪಕರು, ಮಕ್ಕಳಿಗೆ ಅಧ್ಯಯನ ಮಾಡಿ ಮನನ ಮಾಡಿ ಚಿಂತನ ಮಾಡಿ,ಎಂದು ಪ್ರೋತ್ಸಾಹಕ ಮಾತುಗಳನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಆರ್ ಬಿ ಬಾನಪ್ಪನವರ ಇವರು ಮಕ್ಕಳಿಗೆ ಉಪಯುಕ್ತ ಕಾರ್ಯಕ್ರಮ ಆಯೋಜಿಸಿರುವಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಕನ್ನಡ ನಾಡು ನುಡಿಯ ಗೀತೆಗಳ ಪ್ರಸ್ತುತಿಯನ್ನು ಶ್ರೀಮತಿ ಪ್ರಮಿಳಾ ಜಕ್ಕಣ್ಣವರ ಹಾಗೂ ಶ್ರೀ ಪ್ರೇಮಾನಂದ ಶಿಂಧೆ ಮಾಡಿದರು. ಡಾ ಪೂರ್ಣಿಮಾ ಮುಕ್ಕುಂದಿ ಮತ್ತು ಶ್ರೀ ಆರ್ ಬಿ ಬಾನಪ್ಪನವರ ಇವರನ್ನು ಸನ್ಮಾನ ಮಾಡಲಾಯಿತು.. ವೇದಿಕೆಯ ಮೇಲೆ ಶ್ರೀ ಎಸ್ ಎಂ ದಾನಪ್ಪಗೌಡರ, ಶ್ರೀ ಬಸವರಾಜ ಬಾರ್ಕಿ, ಶ್ರೀ ಬಿ ಎಸ್ ದೇಸಾಯಿ ಮಾರ್ತಾಂಡಪ್ಪ ಕತ್ತಿ ಇದ್ದರು..
ಪ್ರಾರಂಭದಲ್ಲಿ ಶ್ರೀಮತಿ ಸುಪ್ರೀಯಾ ಜಂಬಗಿ ಇವರು ಪ್ರಾರ್ಥಿಸಿದರು.. ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು. ಶಿಕ್ಷಕರಾದ ಶ್ರೀ ಎಂ ಆರ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಂತೇಶ್ ನರೇಗಲ್ ಎಲ್ಲರನ್ನೂ ಸ್ವಾಗತಿಸಿ,ವಂದಿಸಿದರು.ಕಾರ್ಯಕ್ರಮದಲ್ಲಿ ಶ್ರೀಕಾಂತ ಮುಳಗುಂದ,ಕೃಷ್ಣಮೂರ್ತಿ ಹಾಗೂ ಪ್ರೌಢಶಾಲೆ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!