ಮಕ್ಕಳು ಗಣರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯನ್ನು ಅರಿಯಬೇಕು – ಮಾಜಿ ಕ್ಯಾಪ್ಟನ್ ಡಾ.ಮಾರಿಯೊ

ಹುಬ್ಬಳ್ಳಿ  26 :– ಮಕ್ಕಳು ಗಣರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯನ್ನು ಅರಿಯಬೇಕು ದೇಶ ಹಾಗೂ ಗುರುಗಳನ್ನು ಗೌರವಿಸಬೇಕೆಂದು ಭಾರತಿಯ ಸೇನೆಯ ಮಾಜಿ ಕ್ಯಾಪ್ಟನ್ ಡಾ.ಮಾರಿಯೊ ಅಭಿಪ್ರಾಯ ಪಟ್ಟರು.

ಅವರು ನವನಗರ ರೋಟರಿ ಶಿಕ್ಷಣ ಸಂಸ್ಥೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಧ್ವಜಾರೋಹಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ರೋ.ಎಸ್‌.ವಿ.ಶಿರಗುಪ್ಪಿ , ಸಂಸ್ಥೆಯ ಕಾರ್ಯದರ್ಶಿ ಡಾ..ಪಿ.ಅಣ್ಣಿಗೇರಿ , ಖಜಾಂಚಿ .ಎಂ.ಎಫ್ . ಮನಗುಂಡಿ , ಕಾರ್ಯಕಾರಿ ಮಂಡಳಿಯ ಸದಸ್ಯರಾದ , .ಎಸ್.ಜಿ.ಮಾಳಾಪುರ,.ಎಸ್.ಜಿ.ಟೆಂಗಿನಕಾಯಿ – ಡಾ.ಎನ್.ಪಿ.ಸಾನು .ಗಿರೀಶ ಬಮ್ಮನಗೌಡರ, ಶಶಿಕಾಂತ ಮಾಳಾಪರ ಹಾಗೂ ಸಂಸ್ಥೆಯ ಸದಸ್ಯರಾದ, ಓ. .ಜಿ.ಪಾಟೀಲ , .ಡಾ.ಎಂ,ಎ.ರಡೇರ , ಮಹಾಂತೇಶ ಕಡಪಟ್ಟಿ , ಸಂಜೋತ ಬೇವೂರ ಆಗಮಿಸಿದ್ದರು.

ಶಾಲೆಯ ಪ್ರಾಚಾರ್ಯರಾದ ಡಾ.ವಿಜಯಶ್ರೀ ಕಲಬುರ್ಗಿ ಸ್ವಾಗತಿಸಿದರು . ಶಾಲಾ ಶಿಕ್ಷಕರು, ಸಿಬ್ಬಂದಿ , ಬಾಲಕರು ಮತ್ತು ಮಕ್ಕಳು ಆಗಮಿಸಿದ್ದರು. ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು .

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!